ಎಲ್ಲರೂ ದಡ ಸೇರಿದರು

ಎಲ್ಲರೂ ದಡ ಸೇರಿದರು
ನಾನು ಮಾತ್ರ ನಡು ನೀರಿನಲ್ಲಿ

ಎಲ್ಲರೂ ಹೊಳದಾಟಿದರು
ನಾನು ಮಾತ್ರ ಮುರುಕು ದೋಣಿಯಲ್ಲಿ

ಕತ್ತರಿಸುತ್ತಿದೆ ಚಳಿ
ತತ್ತರಿಸುತ್ತಿದೆ ಎದೆ ನಡುಗಿ

ಅಲೆಯೊಳಗೆ ತೇಲಿ ಬಿಟ್ಟಿರುವೆ
ಕಂಬನಿಯ ಮಾಲೆ
ಇರುವುದೊ ಇಲ್ಲವೊ
ನಾನರಿಯೆ ನನ್ನ ಪಾಲಿಗೆ ನಾಳೆ

ಎಲವೊ ಚಂದಿರನೆ
ನೀನಾದರೂ ಇಳಿ ಬಿಡಬಾರದೆ
ನೂಲ ಏಣಿ
ಅಗಣಿತ ತಾರಾ ಗಣಿಗಳೇ
ಈ ಕಂಗೆಟ್ಟ ಕೆಳದಿಯನು
ಕರುಣೆಯಿಂದಲೇ ಕಾಣಿ

ಏನಚ್ಚರಿ!
ನರನಾಡಿಯಲಿ ಧುಮ್ಮಿಕ್ಕಿ ಹರಿದು
ಬೆಚ್ಚಗೆ ಇಟ್ಟಿದ್ದಾಳೆ ರಕ್ತದೇವತೆ
ಪುಪ್ಪುಸದಲಿ ನೆಲೆಗೊಂಡು
ಹುರಿದುಂಬಿಸುತ್ತಿದ್ದಾನೆ ಪ್ರಾಣವಾಯು
ಒಂದಿನಿತೂ ಕೊಂಕಿಲ್ಲ ಬಾಡಿಲ್ಲ
ಎದೆಯೊಳಗಣ ಸಹಸ್ರ ದಳದ ಕಮಲ

ಎಣ್ಣೆ ತೀರಿದೆ ಎಂದು
ತೋರಿದರೂ
ಜೀವದೀಪ ಭರವಸೆಯಲಿ
ಉರಿಯುವುದು

ನಂಬುಗೆಯೇ ಅಂಬಿಗನು
ಹರಿಗೋಲ ಅಪ್ಪುವೆನು

ಎಲ್ಲರೂ ದಡ ಸೇರಿದರು
ನಾನೂ ಸೇರುವೆನು

ಎಲ್ಲರೂ ಹೊಳೆ ದಾಟಿದರು
ನಾನೂ ದಾಟದೆ ಇರೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಿಲುಗರಿ – ೬
Next post ನಿಶ್ಚಿಂತೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys